ನಿಸ್ವನ - ಮುಗಿದಿತ್ತು ಬೀದಿಮಾತು

ನಿಸ್ವನದ ಭಾಗವಾಗಿ...

  • ಕವನ: ಅಂಬಿಕಾತನಯದತ್ತ
  • ಕವನದ ಕಾಪೀರೈಟ್: ಪುನರ್ವಸು ಬೇಂದ್ರೆ
  • ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್
  • ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್: ಹೇಮಂತ್ ಕುಮಾರ್
  • ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
  • ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
  • ಕೀಬೋರ್ಡ್: ಟೋನಿ ಮ್ಯಾಥ್ಯೂ
  • ರಿದಮ್ ಪ್ಯಾಡ್: ವರದರಾಜ್
  • ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಅಂಬಿಕಾತನಯದತ್ತರ "ಮುಗಿದಿತ್ತು ಬೀದಿಮಾತು" ಎಂಬ ಈ ಕವನ, ಅವರ "ಹೃದಯ ಸಮುದ್ರ" ಸಂಕಲನದಲ್ಲಿದೆ. 

ಈ ಹಾಡಿನ ಕರ್ನಾಟಕ ಶಾಸ್ತ್ರೀಯ ಸಂಗೀತದ ಕನ್ನಡ ಹಾಗೂ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಹೇಮಂತ್ ರಾಗಗಳಿಂದ ಪ್ರೇರಿತವಾದ ರಾಗಸಂಯೋಜನೆಗೆ, ಹಿತವಾದ ಗಿಟಾರ್ ಹಾಗೂ ತಾಳವಾದ್ಯಗಳ ಹಿನ್ನೆಲೆಯಿದೆ.

ಇಡೀ ಕವನ ಹೀಗಿದೆ.

ಮುಗಿದಿತ್ತು ಬೀದಿಮಾತು

ನೆಲ ಹೊರಳುತಿತ್ತು

ನೀರುರುಳುತಿತ್ತು

ಬೆಳಕರಳುತಿತ್ತು ಆಗ.

ಬಿರುಗಾಳಿ ಧೂಳಿ

ಆಕಾಶ ಕಾಳಿ

ಎತ್ತಿತ್ತು ಅಷ್ಟರಾಗ.

ಅಬ್ಬಬ್ಬ ಚುಕ್ಕೆ

ಏನೊಂದು ದಿಕ್ಕೆ

ಬಾನೆಲ್ಲ ತೂತು ತೂತು.

ಬೆಂಕೆಲ್ಲ ಹೂತು

ಮೌನಕ್ಕೆ ಸೋತು

ಮುಗಿದಿತ್ತು ಬೀದಿಮಾತು.

- ಅಂಬಿಕಾತನಯದತ್ತ

ಹೃದಯ ಸಮುದ್ರ: 54

ಪ್ರಕಾಶನ: 1956

Creative Commons License
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.

Creative Commons License
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.

Comments

Popular posts from this blog

ನಿಸ್ವನ - ಜ್ಞಾನಸೂತಕ

ನಿಸ್ವನ - ಮಳೆ

ಕನ್ನಡದ ಭಕ್ತಿ - ಸರ್ವನಾಮಗಳ ಸರ್ಗ