Posts

Showing posts from August, 2023

ನಿಸ್ವನ - ಅವ್ವಾ! ನಾನು ಎಲ್ಲಿಂದ ಬಂದೆ?

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್: ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಇಡೀ ಕವನ ಹೀಗಿದೆ. ಅವ್ವಾ! ನಾನು ಎಲ್ಲಿಂದ ಬಂದೆ? ೧ ಅವ್ವಾ! ನಾನು ಎಲ್ಲಿಂದ ಬಂದೆ? ಅವ್ವಾ! ನನ್ನ ಎಲ್ಲಿಂದ ತಂದೆ? ೨ ನೀ ನನ್ನ ಆಟದಾ ಗೊಂಬಿಯಾಗಿದ್ದೀ-ಕಂದಾ ಮೂರ್ತಿ ಮಾಡಿದೆ ನಿನ್ನ ಅರಲು ಮಿದ್ದಿಽ|| ೩ ಮನೆ ದೇವರ ಬೇಡಿ ಮಾಡಿದೆ ನಿದ್ದಿಽ-ಕಂದಾ ನನ್ನಾ ಉಡಿಯಲ್ಲಿ ನೀ ಬಂದು ಬಿದ್ದೀ|| ೪ ನನ್ನಜ್ಜಿಯಾ ಗೆಜ್ಜಿವಸ್ತ್ರವಾಗಿದ್ದಿಽ-ಕಂದಾ ಕುಲದೇವಿಯಾ ಕೈಯಾ ಶಸ್ತ್ರವಾಗಿದ್ದಿ!|| ೫ ದೊಡ್ಡವಳು ನಾನಾದೆ ನೀನಾದೆ ಸಿದ್ಧಿಽ-ಕಂದಾ ಎದೆಹಾಲು ತೊರೆಸುತ್ತ ತೊಡೆಗೆ ಬಂದಿದ್ದಿಽ|| ೬ ಮಿಂಚಿನೊಲು ನೀ ಬಂದಿ ಸಂಚಿತದೊಳಿದ್ದಿ-ಕಂದಾ ಹೋದಿ-ಗೀದೀ ಎಂದು ಹೌಹಾರಿ ಬುದ್ಧಿ|| ೭ ಎದೆಗೆದೆಯನವಿಚುತ್ತ ಮಾಡುವೆನು ಮುದ್ದಿ-ಕಂದಾ ನಿನ್ನ ಹೃದಯಕೆ ವೇದ್ಯ ಹೃದಯದೀ ಸುದ್ದಿ!|| - ಅಂಬಿಕಾತನಯದತ್ತ ಶತಮಾನ: ಅಪ್ರಕಟಿತ ಈ ಹಾಡುಗಳೆಲ್ಲವೂ  Creative Commons Attribution-NonCo

ನಿಸ್ವನ - ಮೋಡಗಳು ನಾವು

Image
ನಿಸ್ವನದ ಭಾಗವಾಗಿ... ಕವನ: ಚನ್ನವೀರ ಕಣವಿ ಕವನದ ಕಾಪೀರೈಟ್:  ಪ್ರಿಯದರ್ಶಿ ಕಣವಿ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್/ಚೆಲ್ಲೋ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್: ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಈ ಹಾಡಿನಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಶೈಲಿಗೆ ಒಗ್ಗುವಂಥ, ಕರ್ನಾಟಕ ಶಾಸ್ತ್ರೀಯ ಸಂಗೀತದ ಗರುಡಧ್ವನಿ  ರಾಗವನ್ನು ಪಾಶ್ಚಾತ್ಯ ಶಾಸ್ತ್ರೀಯ ಶೈಲಿಯ ಕೊಳಲು, ವಯೊಲಿನ್/ಚೆಲ್ಲೋ ಹಿನ್ನೆಲೆಯಲ್ಲಿ ಕಾಣಬಹುದು. ಇಡೀ ಕವನ ಹೀಗಿದೆ. ಮೋಡಗಳು ನಾವು ೧ ಬಾನು ತನ್ನನವರತ ನೀಲಿಮೆಯ ದಿಟ್ಟಿಸುತ ಕನಸುಗಳ ಕಾಣುತಿಹುದು; ಮೋಡಗಳು ನಾವದರ ವಿಪರೀತ ಹುಚ್ಚುಗಳು ನಮಗಿಲ್ಲ ಮನೆಯಾವುದೂ. ೨ ನಿತ್ಯತೆಯ ಮುಕುಟದಲಿ ನಕ್ಷತ್ರ ಹೊಳೆಯುತಿವೆ ಸ್ಥಿರ ಲಿಖಿತ ರೂಪವಿಹುದು; ನಮ್ಮದೋ ಬರಿ ಸೀಸಕಡ್ಡಿ ಬರೆದಂತಿಹುದು- ಮರು ಚಣದಿ ಅಳಿಸಬಹುದು. ೩ ವಾಯುರಂಗದಿ ಬಂದು ಮದ್ದಲೆಯ ಬಡಿಯುವದು ನಗೆ ಮಿಂಚನೆಸೆವ ಪಾತ್ರ, ಅಲ್ಲದೆಯೆ ನಮ್ಮ ನಗೆ ಮಳೆ ಸುರಿಸುವದು ಸತ್ಯ ಹುಡುಗಾಟವಲ್ಲ ಗುಡುಗು. ೪ ಈಗಲೂ ಪ್ರತಿಫಲಕೆ ಕಾಲಪುರುಷನ ಕೂಡ ಹಕ್ಕು ಸಾಧಿಸುತಿಲ್ಲ ನಾವು. ಜೀವ ತುಂಬಿದ ಉಸಿರೆ ಊದಿಬಿಡುವದು ದೂರ ಹೆ

ನಿಸ್ವನ - ಬೆಳಗುಜಾವ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್: ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಈ ಹಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮುಖಾರಿ , ಹುಸೇನಿ  ರಾಗಗಳನ್ನೂ, ಭೈರವಿ  ರಾಗದ ಛಾಯೆಯನ್ನೂ, Jazz ಶೈಲಿಯಿಂದ ಪ್ರೇರಿತವಾದ ಗಿಟಾರ್ ಹಿನ್ನೆಲೆಯಲ್ಲಿ ಕಾಣಬಹುದು. ಇಡೀ ಕವನ ಹೀಗಿದೆ. ಬೆಳಗುಜಾವ ೧ ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ಝುಂ ಎಂದು ಬಿಟ್ಟ ಮಾರ. ಗುಡಿಗೋಪುರಕ್ಕು ಬಲೆ ಬೀಸಿ ಬಂದ ಅಗೊ ಬೆಳಕು-ಬೇಟೆಗಾರ. ೨ ನಿಶೆಯಳಿದ ಉಷೆಯ ಎಳನಗೆಯ ಬಗೆಗೆ ಸೋತಿರಲು ಜಗವು ಸವಿಗೆ ಕಣ್ಣಿದಿರು ಒಂದು ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ; ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು. ಈ ತುಂಬಿಬಾಳು ತುಂಬಿರುವ ತನಕ ತುಂತುಂಬಿ ಕುಡಿಯಬೇಕು. ೩ ಯಾವಾಗೊ ಕೋಳಿ ಕೂಗಿಹುದು ಏಳಿ, ತಡವೇಕೆ ಪಾನಕೇಳಿ. ಮೊದಲಾಗಲೀಗ, ಅಂಗಡಿಯ ಕದವ ಈ ಕ್ಷಣಕೆ ತೆರೆಯ ಹೇಳಿ.