Posts

Showing posts from November, 2023

ನಿಸ್ವನ - ಎದೆಯು ಮರಳಿ ತೊಳಲುತಿದೆ

Image
ನಿಸ್ವನದ ಭಾಗವಾಗಿ... ಕವನ: ಎಂ ಗೋಪಾಲಕೃಷ್ಣ ಅಡಿಗ ಕವನದ ಕಾಪೀರೈಟ್: ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಗೋಪಾಲಕೃಷ್ಣ ಅಡಿಗ ರ " ಎದೆಯು ಮರಳಿ ತೊಳಲುತಿದೆ " ಎಂಬ ಈ ಕವನ, ಅವರ " ಕಟ್ಟುವೆವು ನಾವು " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಷಡ್ಜಶ್ರುತಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ  G major scale , ಗಾಂಧಾರಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಿಂಧುಭೈರವಿ  ರಾಗ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಭೈರವಿ  ರಾಗ ಅಥವಾ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ   phrygian mode  in B ಹಾಗೂ ಪಂಚಮಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಮಿಶ್ರ ಕಲಾವತಿ  ರಾಗಗಳನ್ನು Jazz-ಶೈಲಿಯಿಂದ ಪ್ರೇರಿತವಾದ ಗಿಟಾರ್ ಹಾಗೂ ವಿಭಿನ್ನ ರೀತಿಯ ಲಯಗಾರಿಕೆಯ ಹಿನ್ನೆಲೆಯಲ್ಲಿ ಹೆಣೆಯಲಾಗಿದೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು. ಇಡೀ ಕವನ ಹೀ

ನಿಸ್ವನ - ಸೆಳವು ೨

Image
ನಿಸ್ವನದ ಭಾಗವಾಗಿ... ಕವನ:  ಕೆ ಎಸ್ ನರಸಿಂಹಸ್ವಾಮಿ ಕವನದ ಕಾಪೀರೈಟ್ ಕೃಪೆ:  ಕೆ ಎಸ್ ನರಸಿಂಹಸ್ವಾಮಿ ಪ್ರತಿಷ್ಥಾನ (ಡಾ|| ಮೇಖಲಾ ವೆಂಕಟೇಶ್,  ವ್ಯವಸ್ಥಾಪಕ ಟ್ರಸ್ಟಿ) ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಸಾರಂಗಿ:  ಸರ್ಫ಼ರಾಜ಼್ ಖಾನ್ ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಕೆ ಎಸ್ ನರಸಿಂಹಸ್ವಾಮಿ ಗಳ " ಸೆಳವು " ಎಂಬ ಈ ಕವನ, ಅವರ " ಸಂಜೆ ಹಾಡು " ಸಂಕಲನದಲ್ಲಿದೆ. ಈ ಹಾಡಿನಲ್ಲಿ ಎರಡು ಲೋಕಗಳಿವೆ. ಇದೇ ಕವನವನ್ನು ಬೇರೊಂದು ಶೈಲಿಯಲ್ಲಿಯೂ ರಾಗಸಂಯೋಜಿಸಿ ಹಾಡಿದ್ದೇನೆ . ಅಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಯಮನ್ ಕಲ್ಯಾಣ್ ಹಾಗೂ ಭೈರವಿ (ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಿಂಧೂಭೈರವಿ) ರಾಗಗಳ ಲೋಕಗಳಿವೆ. ಇಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ (ಅನ್ಯಸ್ವರವಿರದ)  ಖಮಾಚ್  ರಾಗದ ಮಧ್ಯ, ತಾರ ಸ್ಥಾಯಿ ಹಾಗೂ ವೀಣೆ, ಕೊಳಲುಗಳ ಲೋಕ ಮೊದಲನೆಯದಾದರೆ, ಎರಡೂ ನಿಷಾದಗಳಿರುವ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಖಮಾಜ್ ರಾಗದಲ್ಲಿ ಕೊನೆಗೊಳ್ಳುವ ಮಂದ್ರ ಸ್ಥಾಯಿ ಹಾಗೂ ಸಾರಂಗಿಗಳ ಲೋಕ ಎರಡನೆಯದು. ಎರಡೂ ರಾಗಗಳು ಒಂದ

ನಿಸ್ವನ - ಹೃದಯದಾಕಾಶ

Image
ನಿಸ್ವನದ ಭಾಗವಾಗಿ... ಕವನ/ಕವನದ ಕಾಪೀರೈಟ್ ಕೃಪೆ:  ಅಮೃತ ಸೋಮೇಶ್ವರ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಅಮೃತ ಸೋಮೇಶ್ವರರ "ಹೃದಯದಾಕಾಶ" ಎಂಬ ಈ ಹಾಡಿನಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ major scale  (ಅಥವಾ ionian mode ) (ಕರ್ನಾಟಕ ಶಾಸ್ತ್ರೀಯ ಸಂಗೀತದ ಶಂಕರಾಭರಣ , ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಿಲಾವಲ್ ರಾಗಗಳ ಸ್ವರಗಳು) ಹಾಗೂ ತುಸುವಾಗಿ mixolydian mode  (ಕರ್ನಾಟಕ ಶಾಸ್ತ್ರೀಯ ಸಂಗೀತದ ಹರಿಕಾಂಭೋಜಿ ರಾಗದ ಸ್ವರಗಳು) ಕಾಣಬಹುದು. ಇಡೀ ಕವನ ಹೀಗಿದೆ. ಹೃದಯದಾಕಾಶ ೧ ಹೃದಯದಾಕಾಶದೊಳು ಉದಿಸಿ ಬಾ ಹೊಂಬೆಳಕೇ, ಸದಯದಲಿ ಮುನ್ನಡೆಸು ಅರಿವು ಬೆಳಕೇ. ಮಧುರವಾಗಲಿ ಬದುಕು, ಹಿಂಗಿ ಹೋಗಲಿ ಅಳುಕು, ಮುದವರಳಿ ಬರಲೆಂದೇ ಎದೆಯ ಬಯಕೆ. ೨ ಎದೆಯುಳುದಿಸಿದ ಬೆಳಕು ವದನದಲಿ ಬೆಳಗಿರಲಿ ಹದವಾಗಿ ಹಸನಿರಲಿ ಜೀವಲತೆಯು. ಸದಮಲ ವಿವೇಕಸುಮ ಮಘಮಘಿಸಿ ಆನಂದ- ಸುಧೆಯ ಸುಮನಸರಾಗಲೆಲ್ಲ ನರರು. ೩ ಸತ್ಯಚೇತನವಾಗಿ, ಸತ್ಯದೀಪವಾಗಿ, ಕತ್ತಲೆಯ ಕೊತ್ತಳವ ಕಳೆದೊಗೆಯ ಬಾ. ಬಿತ

ನಿಸ್ವನ - ಜೋ-ಅರಿವು

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್:  ಪುನರ್ವಸು ಬೇಂದ್ರೆ ಗಾಯನ: ಉಸ್ತಾದ್ ಫ಼ಯಾಜ಼್ ಖಾನ್ ರಾಗಸಂಯೋಜನೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಕನ್ನಡ ರಾಜ್ಯೋತ್ಸವದಂದು  ಉಸ್ತಾದ್ ಫ಼ಯಾಜ಼್ ಖಾನ ರ ದನಿಯಲ್ಲಿ  ಅಂಬಿಕಾತನಯದತ್ತ ರ "ಜೋ-ಅರಿವು" ಕನ್ನಡಿಗರಿಗೂ, ಸಂಗೀತಾಸಕ್ತರಿಗೂ ಸಮರ್ಪಿತ. ಈ ಹಾಡಿನಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ರಾಗ  ಭಟಿಯಾರ್ ಹಾಗೂ ಮಧ್ಯಮಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗ ವಸಂತಿ (ಇದು ಷಡ್ಜಶ್ರುತಿಯಲ್ಲಿ ವಿಠ್ಠಲಪ್ರಿಯಾ ಅಥವಾ ಗುಣಾವತಿ ಹಾಗೂ ಹಿಂದೂಸ್ಥಾನಿಯ ಮಂಗಲ್ ಭೈರವ್ ರಾಗಗಳಂತಾಗುತ್ತದೆ), ಇವುಗಳಿಗೆ Jass-ಶೈಲಿಯಿಂದ ಪ್ರೇರಿತವಾದ ಗಿಟಾರ್ ಹಾಗೂ ವಿಭಿನ್ನ ರೀತಿಯ ಲಯಗಾರಿಕೆಯ ಹಿನ್ನೆಲೆಯಿದೆ. ಇಡೀ ಕವನ ಹೀಗಿದೆ. ಜೋ-ಅರಿವು ೧ ಮಾಟ, ಮಾಟ, ಇದು ಯಾವ ಆಟ ಈ ಬಟಾ ಬಯಲಿನಲ್ಲಿ. ಅಚ್ಚ ಅರಿವು ಬರಿ ಬಚ್ಚ ಅರಿವು ಹೊಸ ಹೊಚ್ಚ ಅರಿವಿನಲ್ಲಿ. ೨ ಅರೆ ಅರಿವಿನಲ್ಲಿ ಮರೆ ಅರಿವಿನಲ್ಲಿ ಹೊರ ಅರಿವಿನಲ್ಲಿ ನೀನು ತೆರೆ ಅರಿವಿನಲ್