Posts

Showing posts with the label ಪಿ ಕೆ ಪರಮೇಶ್ವರ ಭಟ್

ನಿಸ್ವನ - ಮತ್ತೆ ನೆನಪಾಗುತಿದೆ

Image
ನಿಸ್ವನದ ಭಾಗವಾಗಿ... ಕವನ:  ಪಿ ಕೆ ಪರಮೇಶ್ವರ ಭಟ್ ಕವನದ ಕಾಪೀರೈಟ್:  ಮೂಕಾಂಬಿಕಾ ಎಸ್ ಜಿ ರಾಗಸಂಯೋಜನೆ/ಗಾಯನ/ವೀಣೆ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಪಿ ಕೆ ಪರಮೇಶ್ವರ ಭಟ್ಟರ ಈ ಕವನದ ರಾಗಸಂಯೋಜನೆ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗ ನಳಿನಕಾಂತಿ ಯಲ್ಲಿದೆ. ಇಲ್ಲಿ ವೀಣೆ ಹಾಗೂ ಗಿಟಾರ್-ಗಳು ಹದವಾದ ನೆನಪಿನ ಲೋಕದ ಚಿತ್ರ ಬರೆಯುತ್ತವೆ. ಇಡೀ ಕವನ ಹೀಗಿದೆ. ಮತ್ತೆ ನೆನಪಾಗುತಿದೆ ೧ ಕಣ್ಣೀರ ಬಟ್ಟಲಲಿ ಹೊಳೆವ ಮುತ್ತಿನ ಮಾಲೆ, ಬಣ್ಣಗಳ ಮಿಂಚು, ಬೆಳಕು! ಪನ್ನೀರ ಪರಿಮಳದ ಹವಳ ಹಲ್ಲಿನ ಸಾಲು, ಮೊಗದಗಲ ನಗೆಯ ಥಳಕು! ೨ ಬರಡು ಬದುಕಿನ ಬಯಲಲೆತ್ತರದ ನುಡಿಬೆಟ್ಟ, ಬಿತ್ತರದ ಹನಿನೀರ ಕೊಳವು. ಹರಿವ ಕಣ್ಣೋಟದಾ ಸೀಮೆಯಿಲ್ಲದ ತೋಟ ಹತ್ತಿರದ ಸುಮನಸರ ಸುಳಿವು. ೩ ಮತ್ತೆ ನೆನಪಾಗುತಿದೆ, ಮೆತ್ತಗಿನ ಮನದಲ್ಲಿ, ಕೃತ್ತಿಕೆಯ ಮಾಲೆಯಂತೆ. ನಿಂತ ಗಡಿಯಾರದಾ ಹಳೆಯ ಮುಳ್ಳುಗಳಂತೆ ಮಲೆನಾಡ ಮಾವಿನಂತೆ… - ಪಿ ಕೆ ಪರಮೇಶ್ವರ ಭಟ್ ಈ ಹಾಡುಗಳೆಲ್ಲವೂ  Creative Commons Attribution-NonCommercial-NoDerivatives 4.0...

ನಿಸ್ವನ - ಕನಸುಗಳ ಮುಗಿಲೇರಿ

Image
ನಿಸ್ವನದ ಭಾಗವಾಗಿ... ಕವನ:  ಪಿ ಕೆ ಪರಮೇಶ್ವರ ಭಟ್ ಕವನದ ಕಾಪೀರೈಟ್:  ಮೂಕಾಂಬಿಕಾ ಎಸ್ ಜಿ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಸಿತಾರ್:  ಅರ್ಜುನ್ ಆನಂದ್ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಪಿ ಕೆ ಪರಮೇಶ್ವರ ಭಟ್ಟರ ಈ ಕವನದ ರಾಗಸಂಯೋಜನೆಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ದೇಶ್ ರಾಗವನ್ನು ಸಿತಾರ್, ಬಾನ್ಸುರೀ, ವಯೊಲಿನ್ ಹಾಗೂ ಶಾಸ್ತ್ರೀಯ ಲಯಗಾರಿಕೆಯೊಂದಿಗೆ ಕಾಣಬಹುದು. ಇಡೀ ಕವನ ಹೀಗಿದೆ. ಕನಸುಗಳ ಮುಗಿಲೇರಿ ೧ ಕನಸುಗಳ ಮುಗಿಲೇರಿ, ಸಂಚರಿಸಿ ಬಾನಗಲ, ಸವಿಬುತ್ತಿ ಮೆಲ್ಲುವೆಳೆವಕ್ಕಿಗಳಿರಾ, ಕಟ್ಟಿ ಕೆಡವಿದ ರುಚಿರಗೋಪುರಗಳೆನಿತಿಹವೊ, ಮತ್ತೆ ಕಟ್ಟುವ ತವಕವೆನಿತು ಮಧುರ! ೨ ನಿಮ್ಮ ಕಾಣ್ಕೆಗಳೆಲ್ಲ ಸ್ವಚ್ಛಂದಗತಿವಡೆದು ಪೆರರೇರದೆತ್ತರಕೆ ಏರಿ ನಿಲಲಿ. ಕನಸು ತಾ ಸಾಕಾರವಾಗಿ ಭುವನಾಕಾರ ಪಡೆದು ತಮ್ಮನು ತಾವೆ ಕಟ್ಟಿಕೊಳಲಿ ೩ ಸ್ವಪ್ನಲೋಕದ ಕನಕಪಕ್ಷಿಸಂಪುಟದಿಂದ ಮೆಲ್ಲುಲಿಯ ಸವಿಗಾನ ಹೊಮ್ಮಿ ಬರಲಿ. ಪಕ್ಷವಿಕ್ಷೇಪದಲಿ ವಿಶ್ವಚೇತನವಿರಲಿ ಸತ್ವಯುತ ಸವಿಬಾಳ ತ...

ನಿಸ್ವನ - ಮನದ ಮಲ್ಲಿಗೆ

Image
ನಿಸ್ವನದ ಭಾಗವಾಗಿ... ಕವನ: ಪಿ ಕೆ ಪರಮೇಶ್ವರ ಭಟ್ ಕವನದ ಕಾಪೀರೈಟ್: ಮೂಕಾಂಬಿಕಾ ಎಸ್ ಜಿ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ:  ಹೇಮಂತ್ ಕುಮಾರ್ ಗಿಟಾರ್:  ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಬಾನ್ಸುರೀ/ಕೊಳಲು:  ರಘುನಂದನ್ ರಾಮಕೃಷ್ಣ ಕೀಬೋರ್ಡ್:  ಟೋನಿ ಮ್ಯಾಥ್ಯೂ ರಿದಮ್ ಪ್ಯಾಡ್:  ವರದರಾಜ್ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಪಿ ಕೆ ಪರಮೇಶ್ವರ ಭಟ್ಟರ ಈ ಕವನ, ಅವರ "ಮನದ ಮಲ್ಲಿಗೆ" ಕವನಸಂಕಲನಕ್ಕೆ ಶೀರ್ಷಿಕೆಯನ್ನೊದಗಿಸಿದೆ.  ಈ ಹಾಡು ಪಾಶ್ಚಾತ್ಯ ಶಾಸ್ತ್ರೀಯ ಶೈಲಿಯ Aeolian mode ಅಥವಾ natural minor scale ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ರಾಗದಲ್ಲಿದೆ. ಇಡೀ ಕವನ ಹೀಗಿದೆ. ಮನದ ಮಲ್ಲಿಗೆ ೧ ಬದುಕು ಸಂಪದ ಮಮತೆ ಮೈಸಿರಿ      ನಾಳಿನಾಸೆಯ ಸಂಪುಟ! ಜಾರುನೆಲವಿದು ಏಳುಬೀಳುಗಳೆಲ್ಲ      ಕಾಣದ ಸಂಕಟ ೨ ಒಲವು ಒಗೆತನ ಸಿರಿಯು ಬಡತನ      ಕನಸಿನರಮನೆ ಬಾವುಟ! ಮನದ ಮಲ್ಲಿಗೆ ಬಾಡದಂತಿರೆ      ನೆಲದ ಸಂಪದದಾವುಟ! ೩ ಒಲಿದ ಮನಗಳ ಕುಸಿದ ಗೋಪುರ      ಹರಕು ಭೂಪಟರೇಖೆಯೋ? ಬಿರಿದ ಒಮ್ಮತವಿರದ ಬಳಗದ      ಕಳೆದ ದುಗುಡದ ಛಾ...